ಹುಡುಕಿ:
Tuesday, July 28, 2009
ನೋವು- ನಗು
ಯಾಕೆಂದರೆ..ದುಃಖವು ಪ್ರದರ್ಶನಕ್ಕೆ ಇಡುವ ಸರಕಲ್ಲಾ..
Tuesday, July 21, 2009
ಒಂದು ಮಿಂಚೆಯ ಸುತ್ತಾ .....
ಇದು ನನ್ನ ಮತ್ತು ಚೈತ್ರ ನಡುವೆ ನಡೆದ ಒಂದು ಮಿಂಚೆ ಸರಪಣಿ..ನಿಮಗೂ ಸಹ ಇಷ್ಟವಾಗಬಹುದು ಎಂಬ ನಂಬಿಕೆ ನನ್ನದು...ಕೆಳಗಿನಿಂದ ಓದಿ....
to be continued...
------------------------------------------------------------------------------------------
From: H S, Chaitra
Sent: Monday, July 20, 2009 2:24 PM
To: Veerabhadra Setty, Chandan
Subject: RE:
Wah wah, ee point of view channagide
Sariyo tappo gottilla, adre quite fun agide,
_____________________________________________
From: Veerabhadra Setty, Chandan
Sent: Monday, 20 July 2009 2:21 PM
To: H S, Chaitra
Subject: RE:
ಮನಸ್ಸನ್ನಂತೂ ಕೊಡಲಿಲ್ಲಾ..atleast ಕಿರುಬೆರಳಿನ ಉಗುರಾದರೂ ಕೊಡಲಿ ಎಂಬ ಬಯಕೆ..
ಮನದ ಗಳತಿಯಾದರು ಸರಿ..ಇಲ್ಲಾ ಪಾರಾಗಾನ್ ಚಪ್ಪಲಿ ಮಾಡಲ್ ಆದರೂ ಓಕೆ…
Thanks and Regards,
Chandan V
_____________________________________________
From: H S, Chaitra
Sent: Monday, July 20, 2009 2:15 PM
To: Veerabhadra Setty, Chandan
Subject: RE:
Edagalina kiri beralanna tagondu enu maduttiri ?
Nimmi hudugiyenu Paragon slippers modeling madabeke ?
Athava nagunagutta manada gelatiyaadare sake?
_____________________________________________
From: Veerabhadra Setty, Chandan
Sent: Monday, 20 July 2009 2:14 PM
To: H S, Chaitra
Subject: RE:
ನೂರು ನಕ್ಷತ್ರಗಳು ಸೇರಿದರೂ.. ಚಂದ್ರನಾಗುವುದಿಲ್ಲಾ…
ಹೆಂಗೆಳೆಯರು ಸಾವಿರಾರಾದರೂ…ನನ್ನ ಹುಡುಗಿಯ ಎಡಗಾಲಿನ ಕಿರುಬೆರಳಿನ ಉಗುರಿಗೂ ಸಮರಾಗುವುದಿಲ್ಲಾ…
Thanks and Regards,
Chandan V
_____________________________________________
From: H S, Chaitra
Sent: Monday, July 20, 2009 2:08 PM
To: Veerabhadra Setty, Chandan
Subject: RE:
Novannu hanchikollodakkeee iruduvu geleyaru
Avalildre beda; Iddare innu bekaadastu hengeleyaru :)
_____________________________________________
From: Veerabhadra Setty, Chandan
Sent: Monday, 20 July 2009 2:07 PM
To: H S, Chaitra
Subject: RE:
ಮೂರು ಶಾಟು ಟಕಿಲಾ..ಅವಳನ್ನು ಮರೆಸುವುದಿಲ್ಲಾ…
ಈ ನೋವನ್ನು ಕಡಿಮೆ ಮಾಡಕೊಳ್ಳೋಣವೆಂದರೂ..ಬೇರೆಯವರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲಾ…
Thanks and Regards,
Chandan V
____________________________________________
From: H S, Chaitra
Sent: Monday, July 20, 2009 2:01 PM
To: Veerabhadra Setty, Chandan
Subject: RE:
Mooru shotu Taqeela ;)
_____________________________________________
From: Veerabhadra Setty, Chandan
Sent: Monday, 20 July 2009 11:47 AM
To: H S, Chaitra
Subject:
ದೇವದಾಸನಿಗಾದರೋ ಮರೆಯಲು...ಒಬ್ಬಳೇ ಪಾರು..
ಆದರೆ ನನಗೆ...ಸಾವಿರಾರು...
ಪಾರುವ ಮರೆಯಲು ದೇವದಾಸ ಹಿಡಿದ ಬಾಟಲಿ...
ಅವಳ ಮರೆಯಲು..ನಾ ಏನ ಕುಡಿಯಲಿ????
Thanks and Regards,
Chandan V
Tuesday, July 14, 2009
Tuesday, July 7, 2009
ಮಾತು ಕಥೆ..
ತುಟಿ ಮೇಲೆ ಬಂದಂತ ಮಾತೊಂದೆ ಒಂದು..
ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು..
ಆಗುವುದೆಲ್ಲಾ ಒಳ್ಳೆಯದಕ್ಕೆ ಆಯಿತು...
ಮೊಬೈಲ್ ಬಿಲ್ಲು ಕಡಿಮೆಯಾಯಿತು...
Thursday, April 30, 2009
ಅವಳ ನೆನಪು..
ಅವಳ ನೆನಪೇ ಹಾಗೆ..
ಕೆಲವರು ಕುಡಿದು ಹಾಳಾಗುತ್ತಾರೆ
ಕೆಲವರು ಬರೆದು ಹಾಳಾಗುತ್ತಾರೆ...
ಇನ್ನು ಕೆಲವರು ಕುಡಿದು ಬರೆಯುತ್ತಾರೆ..
Wednesday, April 29, 2009
ಅವಳು....
ಸೀರೆಯುಟ್ಟು ಸುಮ್ನೆ ನಿಂತರೂ..
ಅದು ಪೋಸೆ...
ಹಳದಿ ಚೂಡಿಯಲ್ಲಿ ಹೂವಿನ ತೋಟ ಹೊಕ್ಕರೆ..
ಚಿಟ್ಟೆಗಳಿಗೂ ಕನ್ಫ಼ೂಸೆ..
Monday, March 30, 2009
ಕುಡಿ..ಮರಿ..
ಸರಾಯಿ ಕಂಡು ಹಿಡಿದವನಿಗೆ..
ಕೈ ಎತ್ತಿ ಮುಗಿಯಬೇಕು...
ಅದನ್ನು ಕುಡಿದ ಮೇಲೇ
ಅವಳನ್ನು ಮರಿಯಬೇಕು..
ಅವಳನ್ನು ಮರೆಯಲು...
ಮತ್ತೆ ಮತ್ತೆ ಕುಡಿಯಬೇಕು...
Wednesday, March 18, 2009
Thursday, March 12, 2009
ಗೆಳತಿ ನೀ ಸಿಗದಿರಲು…
ಕೈಯಲ್ಲಿ ಸಾರಾಯಿ ಬಟ್ಟಲು..
ತುಟಿಯಲ್ಲಿ ದುಃಖದ ಗಝಲು..
ಎದೆಯಲ್ಲಿ ಮುರಿದ ಪ್ರೇಮದ ಮಹಲು..
ಇಷ್ಟರಿಂದಲೇ ಕಳೆವುದು ನನ್ನ ರಾತ್ರಿ ಹಗಲು..
ಗೆಳತಿ ನೀ ಸಿಗದಿರಲು…
Wednesday, March 11, 2009
ಸುಂದ್ರಿ...
ಎಷ್ಟು ಚೆಂದ ಇದ್ದೆ..
ಪದಗಳು ಸಿಕ್ಕಿದ್ದರೆ ಸಾವಿರಾರು ಕವಿತೆಗಳನ್ನ
ಬರೆದು ಬಿಸಾಕುತ್ತಿದ್ದೆ….
Monday, March 9, 2009
ಅವಳೆಂದರೇ..
ಗಾಲಿಬ್ ನ ಗಜಲು...
ಹೂವಿನ ಗಮಲು..
ಖುಷಿಯ ಬಯಲು..
ಕಡು ನೀಲಿ ಮುಗಿಲು..
ಅದೃಷ್ಟ ಬಿತ್ತುವ ನೇಗಿಲು..
ಸ್ವರ್ಗದ ಬಾಗಿಲು..
ಸಾರಯಿಯ ಅಮಲು..
ಪ್ರೇಮದ ಮಹಲು..
ಸಾವಿರ ಮಜಲು..
ಸುಂದರ ದಿಗಿಲು...
ಮಿಂಚಿಗಿಂತ ಮಿಗಿಲು..
Wednesday, February 18, 2009
Wednesday, February 11, 2009
ಪ್ರೀತಿ ಎಂದರೆ......
ಪ್ರೀತಿ ಎಂದರೆ ಸಾಗರ ತಳದ ಕತ್ತಲೆ ಅಲ್ಲ..
ಪ್ರೀತಿ ಎಂದರೆ ಸುಡುವ ಬೆಂಕಿ ಅಲ್ಲ…
ಪ್ರೀತಿ ಎಂದರೆ ಗುನುಗುವ ಹಾಡು ಅಲ್ಲ..
ಪ್ರೀತಿ ಎಂದರೆ ಜಾತ್ರೆ ಮಿಠಾಯಿ ಅಲ್ಲ..
ಪ್ರೀತಿ ಎಂದರೆ ಕಿಕ್ಕು ಕೊಡುವ ಸರಾಯಿ ಅಲ್ಲ..
ಪ್ರೀತಿ ಎಂದರೆ... ನಮ್ಮ್ ಬಸ್ ಸ್ಟಾಪ್ ಅಲ್ಲಿ ಹತ್ತೊ ಹುಡುಗಿ..
Sunday, February 8, 2009
ಅಮಲು...
ಏರುವುದಿಲ್ಲ ಅಮಲು..
ಕುಡಿದರು ಬಾಟಲುಗಳ ಮೇಲೆ ಬಾಟಲು..
ಒಮ್ಮೆ ಅವಳು ಕಣ್ಣೊಡೆದಳು ನಕ್ಕು..
ಇನ್ನು ಇಳಿದಿಲ್ಲ ಅದರ ಕಿಕ್ಕು...
Wednesday, January 28, 2009
Saturday, January 10, 2009
ನೀನಿಲ್ಲ...
ನನ್ನ ನಿಟ್ಟುಸಿರಲ್ಲಿನ್ನು ನಿನ್ನ ನೆನಪಿರುವುದಿಲ್ಲ..
ನನ್ನ ಕಣ್ಣಲ್ಲಿನ್ನು ನಿನ್ನ ಬಿಂಬವಿರುವುದಿಲ್ಲ
ನನ್ನ ಕನಸಲ್ಲಿನ್ನು ನೀ ಕಾಡುವುದಿಲ್ಲ..
ನನ್ನ ಕಿವಿಯಲ್ಲಿನ್ನು ನಿನ್ನ ದನಿವಿರುವುದಿಲ್ಲ..
ನನ್ನ ಬದುಕಲ್ಲಿನ್ನು ಬಣ್ಣವಿರುವುದಿಲ್ಲ..
ನನ್ನ ಬಾಳಲ್ಲಿನ್ನು ಬೆಳಕಿರುವುದಿಲ್ಲ..
ಕಾರಣ..
ನನ್ನ ಗುಂಡಿಗೆಯಲ್ಲಿ ಪ್ರಾಣವಿರಲ್ಲ...
ಹೇಳಿ ಹೋಗು ಕಾರಣ..
ಜೀವ ಹಸುರು..ಬದುಕು ಶ್ರಾವಣ..
ಜೊತೆಯಿಂದ ಬೇರೆಯಾಗಿ ಹೊರಟೆ...
ಹೋಗುವ ಮುನ್ನ.. ಹೇಳಿ ಹೋಗೆ ಕಾರಣ..
ಕಂಪ್ಲೇಂಟ್ ...
ಅನ್ನೋದು ಗೆಳಯರ ಕಂಪ್ಲೇಂಟ್ ...
ಆದರೆ ನಶೆ ಕೊಡುವ
ವಸ್ತುಗಳಷ್ಟೇ ನನಗೆ ಇಂಪಾರ್ಟೆ೦ಟ್...
ಅವಳು ...
ಅವಳು ಕೈಕೊಟ್ಟ ಹುಡುಗರು ಆಗುವುದಿಲ್ಲ ಪೊರ್ಕಿ...
ಅವಳ ನೆನಪಲ್ಲೇ ಬರೆಯುತ್ತಾರೆ ಕಥೆ - ಕವನ..
ಇಲ್ಲ ಕೊಡುತ್ತಾರೆ ಕುಡಿಯುವ ಕಡೆ ಗಮನ...
ಕವನ ಬರೆಯುವವರು ಆಗುತ್ತಾರೆ ಕಾಳಿದಾಸ..
ಕುಡಿದು ತೂರಾಡುವವರು ಆಗುತ್ತಾರೆ ದೇವದಾಸ...
Monday, January 5, 2009
title ಬೇರೆ ಕೇಡು...
ಸಪ್ತಪದಿ ತುಳಿದು ಬಿಟ್ಟಳು..
ಗಾಜಿನದು ಎಂದರೂ ಕೇಳದೆ..
ನನ್ನ ಕನಸ ಹೊಡೆದಾಕಿ ಬಿಟ್ಟಳು..
ಮಲಗಲು ನಿದ್ರೆ ಬರುವುದಿಲ್ಲ...
ಕನಸಿನ ಕಾರ್ಖಾನೆ ಖಾಲಿಯಾಗಿರುವುದಲ್ಲ....
ಅವಳ ಪ್ರೀತಿಸಿ ಹೃದಯ ಸುಟ್ಟುಕೊಂಡಾಗಿದೆಯಲ್ಲ...
ಇನ್ನು ಕುಡಿದು ಕರುಳ ಸುಟ್ಟುಕೋಬೇಕಲ್ಲ..
Thursday, January 1, 2009
ಅತಿ ಸಣ್ಣ ಕಥೆ
ನಾ ಹಣದ ಹಿಂದೆ ಹೋದೆ... ಅವ್ಳು ಹಣವಂತನ ಹಿಂದೆ ಹೋದ್ಲು